ದಿ 20 ರಿಂದ ಮದಮಕ್ಕನಾಳ ಗ್ರಾಮದ ಶ್ರೀ ಮಹಾಲಕ್ಷ್ಮೀ (ಥಳದವ್ವಾ) ದೇವಿ ಜಾತ್ರಾ ಮಹೋತ್ಸವ

Ravi Talawar
ದಿ 20 ರಿಂದ ಮದಮಕ್ಕನಾಳ ಗ್ರಾಮದ ಶ್ರೀ ಮಹಾಲಕ್ಷ್ಮೀ (ಥಳದವ್ವಾ) ದೇವಿ ಜಾತ್ರಾ ಮಹೋತ್ಸವ
WhatsApp Group Join Now
Telegram Group Join Now
ಹುಕ್ಕೇರಿ  : ತಾಲೂಕಿಸ ಮದಮಕ್ಕನಾಳ ಗ್ರಾಮದ ಶ್ರೀ ಮಹಾಲಕ್ಷ್ಮೀ (ಥಳದವ್ವಾ) ದೇವಿ ಜಾತ್ರಾ ಮಹೋತ್ಸವವು  ಗುರುವಾರ ದಿ 20 ರಿಂದ ಸೋಮವಾರ  ದಿ.24 ವರೆಗೆ ಅತಿ  ವಿಜೃಂಭಣೆಯಿಂದ  ಜರುಗಲಿದೆ.
ಗುರುವಾರ ದಿ 20   ರಂದು   ಮುಂಜಾನೆ 9.00 ಘಂಟೆಗೆ  ಶ್ರೀ ಷ  ಬ್ರ  ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿ ಗಳಿಂದ   ಧ್ವಜಾರೋಹಣ  ಭಕ್ತಾದಿಗಳಿಂದ ಹಿರೆ ಹೋಳೆ (ಕೃಷ್ಣಾ ನದಿ) ಯಿಂದ ನೀರು ತರುವುದು ಹಾಗೂ ಸಂಜೆ 7-00 ಘಂಟೆಗೆ ಪಲ್ಲಕ್ಕಿ ಉತ್ಸವ   ಜರುಗುವುದು   ರಾತ್ರಿ  10 00 ಘಂಟೆಗೆ  ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ಶುಕ್ರವಾರ  ದಿ 21 ರಂದು. ಬೆಳಿಗ್ಗೆ  5-30 ರಿಂದ  ದೇವಿಗೆ ಸೀರೆ ಏರಿಸುವದು ಮತ್ತು ಉಡಿ ತುಂಬುವ ಕಾರ್ಯಕ್ರಮ ಮಧ್ಯಾಹ್ನ 2-30 ರಿಂದ  ದೇವಿಯ ಮೂರ್ತಿಯನ್ನು ವಾದ್ಯಮೆಳದೊಂದಿಗೆ ಮೆರವಣಿಗೆ ಮುಖಾಂತರ ದೇವಸ್ಥಾನಕ್ಕೆ ತಂದು ಮೂರ್ತಿ ಪ್ರತಿಷ್ಠಾಪನೆ ಮಾಡಿವುದು ಸಂಜೆ 4-00 ರಿಂದ  ಊರಿನ  ಭಕ್ತಾದಿಗಳಿಂದ  ದಂಡವತ್ತ ಕಾಯ೯ಕ್ರಮ ರಾತ್ರಿ 8- 00 ಘಂಟೆಗೆ  ದೇವಿಗೆ ನೈವೇದ್ಯ ಅರ್ಪಿಸುವುದು. ಇದೇ ದಿನ ಪೂಜ್ಯರು ಹಾಗೂ ಅತಿಥಿಗಳಾದ ಹುಕ್ಕೇರಿ ಹಿರೇಮಠದ  ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಮಮದಾಪುರ   ಶ್ರೀ ಮೌನ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಯರಗಟ್ಟಿ ರಾಜ್ ರಾಜೇಶ್ವರಿ ಆಶ್ರಮದ  ಶ್ರೀ ಗಣಪತಿ ಮಹಾರಾಜರು,  ಶ್ರೀ  ಅಭಿನವ  ಮಂಜುನಾಥ  ಮಹಾರಾಜರು, ಅವುಜೀಕರ ಆಶ್ರಮ ಕ್ಯಾರಗುಡ್ಡ ಹುಕ್ಕೇರಿ,  ಬ್ರಹ್ಮಶ್ರೀ ಬಾಳಯ್ಯಾ ಸ್ವಾಮಿಗಳು  ತವಗಮಠ,  ಶಾಸಕ  ನಿಖಿಲ್ ಉ ಕತ್ತಿ, ಮಾಜಿ ಸಂಸದರಾದ ರಮೇಶ  ವ್ಹಿ ಕತ್ತಿ, ಸಂಸದೆ  ಕು ಪ್ರಿಯಾಂಕಾ ಸ. ಜಾರಕಿಹೊಳಿ ಪಾಲ್ಗೊಳ್ಳಲಿದ್ದಾರೆ.
ಶನಿವಾರ ದಿ 22  ರಂದು ದೇವಿ ಅಲಂಕಾರ ಶ್ರೀ ದೇವಿ ದಶ೯ನ  ರಾತ್ರಿ 10-30 ಕ್ಕೆ ಅತ್ತಿಗೆಯೇ ನನ್ನ ಹೆತ್ತಮ್ಮ (ಅಥಾ೯ತ)  ಮುತ್ತಿನಂಥ ಮೈದುನ  ಎಂಬ ಸುಂದರ ಸಾಮಾಜಿಕ  ನಾಟಕ ನಡೆಯಲಿವೆ, ಮುಖ್ಯ ಅತಿಥಿಗಳಾಗಿ ಧಾರವಾಡ ಪಿ ಎಸ್ ಐ  ಶಂಕರ್ ಕೋಳಿ  ಆಗಮಿಸಲಿದ್ದಾರೆ,  ರವಿವಾರ  ದಿ 23 ರಂದು ದೇವಿ ಅಲಂಕಾರ ದೇವಿ ದಶ೯ನ ಆನಂದ ಮೇಲೋಡಿಸ್ಬೆ. ಬೆಳಗಾವಿ ಇವರಿಂದ ಆಕೆ೯ಸ್ಟರಾ (ರಸಮಂಜರಿ ) ಕಾಯ೯ಕ್ರಮ ನಡೆಯಲಿದೆ.  ಮುಖ್ಯ ಅತಿಥಿಗಳಾಗಿ   ಹುಕ್ಕೇರಿ ಸಿ ಪಿ ಐ    ಮಹಾಂತೇಶ ಬಸ್ಸಾಪೂರೆ   ಆಗಮಿಸುವರು.
ಸೋಮವಾರ  ದಿ  24 ರಂದು ಸಂಜೆ  8-00 ಘಂಟೆಗೆ ಪಲ್ಲಕ್ಕಿ ಉತ್ಸವ ದೊಂದಿಗೆ ಜಾತ್ರೆ ಮುಕ್ತಾಯ ಗೋಳ್ಳುವುದು ಎಂದು  ಜಾತ್ರಾ ಕಮಿಟಿ ಸದಸ್ಯರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp Group Join Now
Telegram Group Join Now
Share This Article