ಹಿಂದೂ ಪರ ಕಾರ್ಯಕರ್ತರಿಂದ ಪ್ರಯಾಗರಾಜ್ ಗೆ ಪ್ರಯಾಣ

Ravi Talawar
ಹಿಂದೂ ಪರ ಕಾರ್ಯಕರ್ತರಿಂದ ಪ್ರಯಾಗರಾಜ್ ಗೆ ಪ್ರಯಾಣ
WhatsApp Group Join Now
Telegram Group Join Now
ಬೈಲಹೊಂಗಲ : ಬೈಲಹೊಂಗಲ ಹಾಗೂ ಮುರಗೋಡದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರಿಂದ ಪ್ರಯಾಗರಾಜ್ ಯಾತ್ರೆಗೂ ಮೊದಲು
ಪಟ್ಟಣದ ಕರಿಗುಡಿ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಧಾನ ಅರ್ಚಕರಾದ ಹರ್ಷಾ ಪೂಜಾರಿ ಅವರು  ಮಾತನಾಡಿ ಈ ವಿಶೇಷ ಮಹಾಕುಂಭ ಮೇಳ 144 ವರ್ಷಗಳ ನಂತರ ನಡೆಯುತ್ತಿದ್ದು ಸಾಗರೋಪಾದಿಯಲ್ಲಿ ಜನ ಯಾತ್ರೆ ಕೈಗೊಂಡಿದ್ದು ಜಿಲ್ಲೆಯಿಂದ ಅದರಲ್ಲೂ ಬೈಲಹೊಂಗಲದಿಂದ ಪುಣ್ಯ ಸ್ನಾನ ಮಾಡಲು ಸಾವಿರಾರು ಜನ ಸ್ವಂತ ವಾಹನ,ರೈಲು ಮೂಲಕ ಮಹಾಕುಂಭ ಮೇಳಕ್ಕೆ ತೆರಳುತ್ತಿದ್ದು ಯಾತ್ರಿಕರ‌ ಕ್ಷೇಮಕ್ಕಾಗಿ ಈ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರಶಾಂತ್ ಅಮ್ಮಿನಭಾವಿ, ಚಿದಂಬರ ಮೇಟಿ, ಸಚಿನ್ ಕಡಿ, ಮಹೇಶ್ ನರಿ, ಪ್ರವೀಣ್ ಶಿಂಗಾರಿ, ಗಿರೀಶ್ ಹರಕುಣಿ, ಈರಣ್ಣ ಕಾಜಗಾರ, ಸಂತೋಷ ಕಮತಗಿ, ಮಹಾಂತೇಶ ಪಾಟೀಲ, ಕಾರ್ತಿಕ ಬಾಳಿಕಾಯಿ, ವಿಷ್ಣು ಲಮಾಣಿ,ರವಿ ಯಾಸನ್ನವರ, ಅಭಿಷೇಕ ಈಟಿ ಹಾಗೂ ಅನೇಕರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article