ಸರ್ಕಾರ ಭತ್ತ ಖರೀದಿ ಪ್ರಕ್ರಿಯೆ ವಿಳಂಬ; ಪಂಜಾಬ್​ ರೈತರು ಹೆದ್ದಾರಿ ತಡೆದು ಹೋರಾಟ

Ravi Talawar
ಸರ್ಕಾರ ಭತ್ತ ಖರೀದಿ ಪ್ರಕ್ರಿಯೆ ವಿಳಂಬ; ಪಂಜಾಬ್​ ರೈತರು ಹೆದ್ದಾರಿ ತಡೆದು ಹೋರಾಟ
WhatsApp Group Join Now
Telegram Group Join Now

ಚಂಡೀಗಢ: ಕೇಂದ್ರ ಮತ್ತು ಪಂಜಾಬ್​ ಸರ್ಕಾರ ಭತ್ತ ಖರೀದಿ ಪ್ರಕ್ರಿಯೆ ವಿಳಂಬಗೊಳಿಸಿದೆ. ಇದರಿಂದ ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ಉಂಟಾಗಿದೆ ಎಂದು ಆರೋಪಿಸಿ ಸಂಯುಕ್ತ ಕಿಸಾನ್​ ಮೋರ್ಚಾ ರೈತ ಸಂಘಟನೆ ಹೆದ್ದಾರಿ ಪ್ರತಿಭಟನೆ ನಡೆಸುತ್ತಿದೆ.

ಇಂದು ನಾಲ್ಕು ಗಂಟೆಗಳ ಕಾಲ ಚಂಡೀಗಢ – ದೆಹಲಿ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ಆರಂಭಿಸಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಅಂಬಲಾ – ಚಂಡೀಗಢ ಹೆದ್ದಾರಿಯನ್ನು 11ರಿಂದ ಮಧ್ಯಾಹ್ನ 3ರವರೆಗೆ ಬಂದ್​ ಮಾಡಲಾಗುವುದು ಎಂದು ರೈತ ಸಂಘಟನೆಗಳು ಮೊದಲೇ ತಿಳಿಸಿವೆ.

ಹೆದ್ದಾರಿ ಬಂದ್​ನಿಂದ ಸವಾರರಿಗೆ ತೊಂದರೆಯಾಗದಂತೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದ್ದು, ಸವಾರರಿಗೆ ಪರ್ಯಾಯ ಮಾರ್ಗವಾಗಿ ಬರ್ವಾಲ, ಅಂಬಲಾ ಕಡೆ ಸಾಗಬಹುದು ಎಂದು ಡಿಎಸ್​ಪಿ ಬಿಕ್ರಮಜಿತ್​ ಸಿಂಗ್​ ಬ್ರರ್​ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article