ಮಾಜಿ ಸಿಎಂ ಎಸ್ ಬಂಗಾರಪ್ಪನವರ ಕುರಿತು ಮನದಾಳ ಮಾತು ಬಿಚ್ಚಿಟ್ಟ ಸಚಿವ ಸತೀಶ್‌ ಜಾರಕಿಹೊಳಿ

Ravi Talawar
ಮಾಜಿ ಸಿಎಂ ಎಸ್ ಬಂಗಾರಪ್ಪನವರ ಕುರಿತು ಮನದಾಳ ಮಾತು ಬಿಚ್ಚಿಟ್ಟ ಸಚಿವ ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now
ಬೆಳಗಾವಿ: ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನನ್ನ ಜೀವನದ ಆದರ್ಶ ವ್ಯಕ್ತಿ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಎಸ್ ಬಂಗಾರಪ್ಪನವರ ಕುರಿತು ಮನದಾಳದ ಮಾತು ಬಿಚ್ಚಿಟ್ಟರು.
ಹೌದು… ಇಂದು ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ ಜರುಗಿದ ʻನಮ್ಮ‌ ಶಾಲೆ ನಮ್ಮ ಜವಾಬ್ದಾರಿʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತಂದೆಯವರ ಜೊತೆ ನಾನು ಕೂಡಾ ರಾಜಕೀಯ ಪ್ರಾರಂಭ ಮಾಡಿದೇವು. ಆಗ ನಮಗೂ ಕೂಡಾ  ಎಸ್ ಬಂಗಾರಪ್ಪ ಅವರನ್ನು ನೋಡಬೇಕೆಂಬ ಕಾತುರ ಹೆಚ್ಚಾಗಿತ್ತು. ಅವರ ಡ್ರಸ್‌, ಅವರ ಕನ್ನಡಕ ಅವರ ಲೈಫ್‌ ಸ್ಟೈಟ್‌ ನೋಡವುದೇ ಒಂದು ಚೆಂದ ಎಂದು ಮಾಜಿ ಸಿಎಂ ದಿ. ಎಸ್ ಬಂಗಾರಪ್ಪನವರ ಕುರಿತು ಸಚಿವರು ತಮ್ಮದೆಯಾದ ದಾಟಿ ಮೂಲಕ ಹೊಗಳಿದರು.
ಕಲರ್ ಪುಲ್ ರಾಜಕಾರಣ, ಧೈರ್ಯಕ್ಕೆ ಎಸ್ ಬಂಗಾರಪ್ಪನವರಿಗೆ  ಎಸ್ ಬಂಗಾರಪ್ಪನವರೇ ಸಾಟಿ.  ನಾವು ರಾಜಕಾರಣಕ್ಕೆ ಕಾಲಿಟ್ಟಾಗ  ಎಸ್ ಬಂಗಾರಪ್ಪ ಅವರು ಕಲರ್ ಫುಲ್‌ ರಾಜಕಾರಣಿಯಾಗಿದ್ದರು. ನಾವು ಕೂಡಾ ಅವರ ತೋಟದ ಮನೆ ಕುಬಟೂರಿಗೆ ಹೋಗುತ್ತಿದ್ದೇವು. ಅಲ್ಲದೇ ರಾಜ್ಯದ ಅಭಿವೃದ್ಧಿಗೆ ಎಸ್.ಬಂಗಾರಪ್ಪ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ದಿ. ಎಸ್ ಬಂಗಾರಪ್ಪನವರು ನನ್ನ ಜೀವನದ ಆದರ್ಶ ವ್ಯಕ್ತಿ:  ಮಾಜಿ ಸಿಎಂ ಎಸ್‌ ಬಂಗರಪ್ಪನವರು ಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡದೇ  ಗೆಲುವು ಸಾಧಿಸುತ್ತಿದ್ದರು. ನಾವು ಕೂಡಾ ಅವರನ್ನೇ ಆದರ್ಶವಾಗಿಟ್ಟುಕೊಂಡು ಅವರಂತೆ ಗೆಲ್ಲಬೇಕೆಂದು 2018ರ ಚುನಾವಣೆಯಲ್ಲಿ ಪ್ರಚಾರಕ್ಕೆ ಹೋಗದೇ  ನಾನು ಕೂಡಾ ಚುನಾವಾಣೆಯಲ್ಲಿ ಗೆಲುವು ಸಾಧಿಸಿದೆ. ಅದರಂತೆ ಆಹಾರ ಪದ್ದತಿಯನ್ನು ಸಹ ಅವರಂತೆ ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ಹೇಳುವ ಮೂಲಕ ಎಸ್ ಬಂಗಾರಪ್ಪನವರ ಕುರಿತು ಮನದಾಳದ ಮಾತು ಬಿಚ್ಚಿಟ್ಟರು.
WhatsApp Group Join Now
Telegram Group Join Now
Share This Article