ಶ್ರಾವಣಮಾಸ ಮೂರನೇ ಶನಿವಾರ ಹನುಮಂತ ದೇವಾಲಯದಲ್ಲಿ ವಿಶೇಷ ಪೂಜೆ

Ravi Talawar
ಶ್ರಾವಣಮಾಸ ಮೂರನೇ ಶನಿವಾರ ಹನುಮಂತ ದೇವಾಲಯದಲ್ಲಿ  ವಿಶೇಷ ಪೂಜೆ
WhatsApp Group Join Now
Telegram Group Join Now
ಬಳ್ಳಾರಿ: ಶ್ರಾವಣಮಾಸ ಮೂರನೇ ಶನಿವಾರ ಹಿನ್ನೆಲೆ ನಗರ ಸೇರಿದಂತೆ ಜಿಲ್ಲೆಯ ಶ್ರೀ ಹನುಮಂತದೇವರ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಪೂಜೆ, ಶ್ರೀ ಹನುಮಾನ ಚಾಲಿಸಾ ಮಂತ್ರ ಪಠಣ, ಶ್ರೀ ಹರಿವಾಯುಸ್ತುತಿ ಮಂತ್ರ ಪಠಣೆ, ವಾಯುದೇವರಿಗೆ ವಿಶೇಷ ಅಲಂಕಾರ, ಮಹನೈವೇದ್ಯ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ನಡೆದವು.
ವಿಶೇಷ ಪೂಜೆ: ಶ್ರಾವಣ ಮಾಸದ ಮೂರನೇ ಶನಿವಾರ ಹಿನ್ನೆಲೆ, ನಾಡಿನ ಸಮಸ್ತ ನಾಗರಿಕರ ಒಳಿತಿಗಾಗಿ ಬಳ್ಳಾರಿ ನಗರ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಪ್ರಯಾಣ ಬೆಳೆಸಿ, ಬ್ರಹ್ಮಣಿ ಮುಹೂರ್ತದಲ್ಲಿ ಸಮೀಪದ ಮುರಡಿ, ನೇಮಕಲ್ಲು, ಹಾಗೂ ಕಸಾಪುರ ಶ್ರೀ ಆಂಜಿನೇಯ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳ್ಳಾರಿ ಸೇರಿದಂತೆ ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ಸಮೃದ್ಧಿಯಾಗಿ ಬರಲಿ, ಜನರಿಗೆ ಆರೋಗ್ಯ ಆವಿಷ್ಯ, ಸಂಪತ್ತುನ್ನು ದೇವರು ಹೆಚ್ಚಿಸಲಿ, ಪ್ರತಿಯೊಬ್ಬರ ಬಾಳಲ್ಲಿ ನೆಮ್ಮದಿ ಸಿಗಲೆಂದು ಪ್ರಾರ್ಥಿಸಿದರು.
ತಮ್ಮ ಅಪಾರ ಬೆಂಬಲಿಗರೊಂದಿಗೆ ಮೂರು ಆಂಜಿನೇಯ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ ಮೊತ್ಕರ್ ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article