ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವೇ ಮಹಿಳಾ ಸಬಲೀಕರಣಕ್ಕೆ ಬಲ: ನಿತ್ಯಾನಂದ ಸ್ವಾಮೀಜಿ

Ravi Talawar
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವೇ ಮಹಿಳಾ ಸಬಲೀಕರಣಕ್ಕೆ ಬಲ: ನಿತ್ಯಾನಂದ ಸ್ವಾಮೀಜಿ
WhatsApp Group Join Now
Telegram Group Join Now

ಮುಧೋಳ: ಅ.13., ತಾಲೂಕಿನ ಉತ್ತುರ ವಲಯದ ರೂಗಿ ಕಾರ್ಯಕ್ಷೇತ್ರದ ಓಂ ಸಾಯಿ ರಾಮ ಜ್ಞಾನವಿಕಾಸ ಕೇಂದ್ರದಲ್ಲಿ ಕೇಂದ್ರ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಅಡವಿ ಸಿದ್ಧೇಶ್ವರ ಮಠದ ಶ್ರೀ ನಿತ್ಯಾನಂದ ಸ್ವಾಮೀಜಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ
ಸಂಘವೇ ಮಹಿಳಾ ಸಬಲೀಕರಣಕ್ಕೆ ಬಲ ನೀಡುವ ಸಂಘವಾಗಿದೆ. ಅದಕ್ಕೆ ಈ ಸಂಘದ ಸದಸ್ಯರಾಗಿ ತಾವೆಲ್ಲರೂ  ಜೊತೆಯಾಗಿ ಬೆಳೆಯಬೇಕು ಎಂದು ಹೇಳುವುದರ ಜೊತೆಗೆ ಎರಡು ವರ್ಷದ ಹಿಂದೆ ಸಂಘದ ಕಾರ್ಯಕ್ರಮಗಳು ಆಗುವುದನ್ನು ನೋಡಿ ನಮ್ಮ ರೂಗಿ ಗ್ರಾಮಕ್ಕು ಧರ್ಮಸ್ಥಳ ಯೋಜನೆಯನ್ನು ತಂದರೆ ಉತ್ತಮವಾಗುವುದು ಎಂದು ತಿಳಿಸಿದಾಗ ಕಾರ್ಯಕರ್ತರು ಗ್ರಾಮಕ್ಕೆ ಬಂದು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದರು. ಹೆಣ್ಣು ಮಕ್ಕಳಿಗೆ ಇದೊಂದು ಉತ್ತಮ ವೇದಿಕೆ ಆದ್ದರಿಂದ ಇದನ್ನು ಬಳಸಿಕೊಳ್ಳಿ ಎಂದು ತಿಳಿಸಿ, ಸ್ವ-ಉದ್ಯೋಗಗಳನ್ನು ಮಾಡಲು ನೆರವಾಗುತ್ತಿದೆ ಯೋಜನೆ ಮಾಡುತ್ತಿರುವ ಕಾರ್ಯಕ್ರಮಗಳ ಬಗ್ಗೆ ಹಾಗೂ ಪೂಜ್ಯರ ಬಗ್ಗೆ ನಮಗೆಲ್ಲರಿಗೂ ಗೌರವವಿದೆ ಇದೇ ರೀತಿ ಮುಂದೆ ಯೋಜನೆ ಬೆಳೆದು ಬರಲಿ ಎಂದು ಆಶೀರ್ವಚನ ನೀಡಿದರು.

ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುವರ್ಣ ಜ್ಞಾನ ವಿಕಾಸ ಕಾರ್ಯಕ್ರಮಗಳ ಬಗ್ಗೆ ಯೋಜನೆಯ ಹಲವಾರು ಕಾರ್ಯಕ್ರಮಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
ಮಂಜುನಾಥ ಸ್ವಾಮಿಗೆ ವಿಶೇಷ ಮಂಗಳಾರುತಿ ಉಡಿ ತುಂಬುವ ಕಾರ್ಯಕ್ರಮ, ಆಟೋಟ್ ಸ್ಪರ್ಧೆ ಮಾಡಿಸಿದರು. ಒಕ್ಕೂಟದ ಅಧ್ಯಕ್ಷರಾದ ಲಕ್ಕವ್ವ ಉಪಾಧ್ಯಕ್ಷರಾದ ಗಂಗಮ್ಮ ವಲಯದ
ಮೇಲ್ವಿಚಾರಕರಾದ ಮಹಾಕಾಳಿ ಮೇಡಂ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕೇಂದ್ರದ ಸೇವಾ ಪ್ರತಿನಿಧಿಯಾದ ಸುಧಾ ಪ್ರಾರ್ಥನೆ ಗೀತೆ ಹಾಡಿದರು.ಮತ್ತು ಕೇಂದ್ರದ ಸರ್ವ ಸದಸ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article