ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಶಂಕುಸ್ಥಾಪನೆ

Ravi Talawar
ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಶಂಕುಸ್ಥಾಪನೆ
WhatsApp Group Join Now
Telegram Group Join Now

ಘಟಪ್ರಭಾ. ಪಟ್ಟಣದಲ್ಲಿ  ಬಡವರಿಗೆ, ವ್ಯಾಪಾರಸ್ಥರಿಗೆ, ಉದ್ಯೋಗಿಗಳಿಗೆ ಅಣ್ಣ ನೀಡುವ ಸರ್ಕಾರದ ಮಹತ್ವಕಾಂಕ್ಷೆಯ ಹಸಿದವರಿಗೆ ಅಣ್ಣ ನೀಡುವ ಯೋಜನೆ  ಇಂದಿರಾ ಕ್ಯಾಂಟೀನಗೆ ಸೋಮವಾರದಂದು  ಶಂಕು ಸ್ಥಾಪನೆ ನೆರವೇರಿತು. ಗೋಕಾಕ  ಶಾಸಕರಾದ  ರಮೇಶ ಜಾರಕಿಹೊಳಿ ಅವರ ಸೂಚನೆಯಂತೆ ಮತ್ತು  ಅಂಬಿರಾವ ಪಾಟೀಲ ಅವರ ಮಾರ್ಗದರ್ಶನದಲ್ಲಿ ಇಂದು ಬೆಳಗ್ಗೆ ಘಟಪ್ರಭಾದ Paperwork ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಶಂಕು ಸ್ಥಾಪನೆ ಮಾಡಲಾಯಿತು.

        ಕಾರ್ಯಕ್ರಮದ ದಿವ್ಯ  ಸಾನಿಧ್ಯವನ್ನು ಗುಬ್ಬಲಗುಡ್ಡ ಶ್ರೀ ಕೆಂಪಯ್ಯ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸಿ ಮಾತನಾಡಿ ಬಡವ, ವ್ಯಾಪಾರಸ್ಥರ, ಉದ್ಯೋಗಿಗಳ ಅನುಕೂಲಕ್ಕೆ ಆದಷ್ಟು ಬೇಗ ಇಂದಿರಾ ಕ್ಯಾಂಟೀನ್  ಕಾರ್ಯಾರಂಭ ಮಾಡಲಿ ಎಂದು ಶುಭ ಹಾರೈಸಿದರು.
         ಕಾರ್ಯಕ್ರಮದಲ್ಲಿ  ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಎಂ ಎಸ್ ಪಾಟೀಲ, ಹಿರಿಯ ಮುಖಂಡರಾದ  ಡಿ ಎಂ ದಳವಾಯಿ, ಈಶ್ವರ ಮಟಗಾರ, ಕುಮಾರ್ ಹುಕ್ಕೇರಿ , ಮಲ್ಲು ಕೋಳಿ, ಪ್ರವೀಣ ಮಟಗಾರ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಸಲೀಂ ಕಬ್ಬೂರ,ಈರಣ್ಣ ಕಲಕುಟಗಿ, ಶ್ರೀಕಾಂತ ಮಹಾಜನ್, ಪ್ರತಾಪ ಬೇವಿನಗಿಡದ, ಈರಪ್ಪ ಗಂಡವ್ವಗೋಳ, ಪರಶುರಾಮ ಗೋಕಾಕ ಸೇರಿದಂತೆ ಮಾಜಿ ಸದಸ್ಯರು, ಪುರಸಭೆ ಸಿಬ್ಬಂದಿ ಗ್ರಾಮಸ್ಥರು  ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article