ಕರಾವಳಿಯಲ್ಲಿ ಜುಲೈ 24ರವರೆಗೂ ವಿಪರೀತ ಮಳೆ

Ravi Talawar
ಕರಾವಳಿಯಲ್ಲಿ ಜುಲೈ 24ರವರೆಗೂ  ವಿಪರೀತ ಮಳೆ
WhatsApp Group Join Now
Telegram Group Join Now

ಕರ್ನಾಟಕದ ಕರಾವಳಿಯಲ್ಲಿ ಜುಲೈ 24ರವರೆಗೂ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಹಾಸನ ಜಿಲ್ಲೆಗಳಿಯೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ವಿಜಯನಗರ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ವಿಜಯಪುರ, ರಾಯಚೂರು, ಕೊಪ್ಪಳದಲ್ಲೂ ಮಳೆಯಾಗಲಿದೆ.

ಆಗುಂಬೆ, ಭಾಗಮಂಡಲ, ಶೃಂಗೇರಿ, ಕೊಟ್ಟಿಗೆಹಾರ, ಕಮ್ಮರಡಿ, ಜಯಪುರ, ಕ್ಯಾಸಲ್​ರಾಕ್, ಗೇರುಸೊಪ್ಪ, ಸಿದ್ದಾಪುರ, ಕಳಸ, ಲಿಂಗನಮಕ್ಕಿ, ಕೊಪ್ಪ, ಸೋಮವಾರಪೇಟೆ, ಮಂಕಿ, ಹೊನ್ನಾವರ, ಕೋಟ, ಗೋಕರ್ಣ, ಪೊನ್ನಂಪೇಟೆ, ನಾಪೊಕ್ಲು, ಶಿರಾಲಿ, ಅಂಕೋಲಾ, ಕಾರ್ಕಳದಲ್ಲಿ ಮಳೆಯಾಗಿದೆ.

ಕದ್ರಾ, ಸಿದ್ದಾಪುರ, ಧರ್ಮಸ್ಥಳ, ಎನ್​ಆರ್​ಪುರ, ಹುಂಚದಕಟ್ಟೆ, ಬಾಳೆಹೊನ್ನೂರು, ಸುಳ್ಯ, ಕಾರವಾರ, ಯಲ್ಲಾಪುರ, ಬೆಳ್ತಂಗಡಿ, ಮಾಣಿ, ಮೂಡಿಗೆರೆ, ಜೋಯ್ಡಾ, ಉಪ್ಪಿನಂಗಡಿ, ಮಂಗಳೂರು ವಿಮಾನ ನಿಲ್ದಾಣ, ತ್ಯಾಗರ್ತಿ, ಪುತ್ತೂರು, ಬನವಾಸಿ, ಕಿರವತ್ತಿ, ಬೇಲೂರು, ಭದ್ರಾವತಿ, ಹಾಸನ, ಬಂಡೀಪುರ, ಎಚ್​ಡಿ ಕೋಟೆ, ಮುಲ್ಕಿ, ತರೀಕೆರೆ, ಆನವಟ್ಟಿ, ಹಾರಂಗಿ, ಕುಶಾಲನಗರ, ಚನ್ನಗಿರಿ, ಶಿವಮೊಗ್ಗ, ಚಿತ್ರದುರ್ಗ, ಹೊನ್ನಾಳಿಯಲ್ಲಿ ಮಳೆಯಾಗಿದೆ.

WhatsApp Group Join Now
Telegram Group Join Now
Share This Article