ಜುಲೈ 21ರಿಂದ ಸೆಪ್ಟೆಂಬರ್ 18 ವರಿಗೆ 60ದಿನಗಳು ಚಾತುರ್ಮಾಸ ವ್ರತ

Ravi Talawar
ಜುಲೈ 21ರಿಂದ ಸೆಪ್ಟೆಂಬರ್ 18 ವರಿಗೆ 60ದಿನಗಳು ಚಾತುರ್ಮಾಸ ವ್ರತ
WhatsApp Group Join Now
Telegram Group Join Now
ಬಳ್ಳಾರಿ.19: ಚಾತುರ್ಮಾಸ ವ್ರತದ ಆಚರಣೆ ಅಂಗವಾಗಿ ಹರಿಹರಪುರದ ಜಗದ್ಗುರು ಶಕರಾಚಾರ್ಯ ಶ್ರೀ ಸ್ವಯಂ ಪ್ರಕಾಶ ಸಚ್ಚಿದನಂದ ಸರಸ್ವತಿ ಸ್ವಾಮೀಜಿ ಮೊದಲನೆ ಬಾರಿಗೆ ಬಳ್ಳಾರಿಯ ಸದ್ಗುರು ಬಾಲಾಂಜನೆಯ ಸ್ವಾಮಿ ಮಠದಲ್ಲಿ ಇದೆ ತಿಂಗಳು 21ರಿಂದ ಸೆಪ್ಟೆಂಬರ್ 18 ವರಿಗೆ 60ದಿನ ಗಳು ಚಾತುರ್ಮಾಸ ವ್ರತ ಮಾಡಲಿದ್ದಾರೆಂದು ಮಠದ ಗುರುಗಳು ಬಾಲಾ ನಂದ ಸ್ವಾಮಿ, ಕಾರ್ಯಕ್ರಮ ಸಂಚಾಲಕರು ರಾಜೇಶ್ವರಮ್ಮ ತೆಳಿಸಿದ್ದಾರೆ..
ಶನಿವಾರ ಸಂಜೆ 4ಗಂಟೆಗೆ ನಗರದ ದುರ್ಗಮ್ಮ ದೇವಸ್ಥಾನ ದಿಂದ ಸ್ವಾಮಿಗಳ ಶೋಭಾಯಾತ್ರೆ ನಡೆಯಲಿದೆ… ಸರ್ವ ಭಕ್ತರು ಆಗಮಿಸಬೇಕೆಂದು ಕೋರಿದರು.21ಗುರುಪೂರ್ಣಿಮೆ ಎಂದು ಸ್ವಾಮಿಗಳು ವ್ರತ ಮಾಡಲಿದ್ದಾರೆ.
ಶ್ರೀ ಚಕ್ರ ನವಾ ವರ್ಣ ಪೂಜೆ, ಚಂದ್ರಮೌಳೇಶ್ವರ ವ್ರತ, ಭಕ್ತರಿಗೆ ಆಶೀರ್ವಚನ ಮುಂತಾದ ಕಾರ್ಯಕ್ರಮ ನಡೆಯಲಿವೆ ಎಂದರು. ದಿನ ನಿತ್ಯ ಲಕ್ಷ್ಮಿ ನರಸಿಂಹ ಸ್ವಾಮಿ ಕಲ್ಯಾಣೋತ್ಸವ, ಪಾದಪೂಜೆ,ಗುರು ದರ್ಶನ ಇರುತ್ತವೆಂದರು. ದಿನನಿತ್ಯ ಬೆಳಿಗ್ಗೆ ಭಜನೆ, ದೇವರ ನಾಮ ಸಂಕೀರ್ತನೆ ಸಂಜೇ ಕೋಟಿ ಕುಂಕುಮ ಅರ್ಚನೆ, ಪ್ರತಿ ಶನಿವಾರದಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
WhatsApp Group Join Now
Telegram Group Join Now
Share This Article