ನವದೆಹಲಿ: ನ್ಯಾಯಾಂಗ ಸೇವೆಗೆ ಸೇರಲು ಬಯಸುವ ಕಾನೂನು ಪದವೀಧರರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಸುಪ್ರೀಂ ಕೋರ್ಟ್ ಮಂಗಳವಾರ (ಮೇ 20) ಹೊರಡಿಸಿರುವ ಆದೇಶದ ಪ್ರಕಾರ, ನ್ಯಾಯಾಂಗ ಸೇವೆಗಳ ಪರೀಕ್ಷೆಯನ್ನು ಬರೆಯಲು ಕನಿಷ್ಠ ಮೂರು ವರ್ಷಗಳ ವಕೀಲ ವೃತ್ತಿಯ ಅನುಭವ ಕಡ್ಡಾಯವಾಗಿದೆ. ಈ ತೀರ್ಪಿನಿಂದ ಹೊಸದಾಗಿ ಕಾನೂನು ಪದವಿ ಪಡೆದವರಿಗೆ ಹುದ್ದೆಗಳಿಗೆ ʻನ್ಯಾಯಾಂಗ ಸೇವೆʼ ಪರೀಕ್ಷೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಆಲ್ ಇಂಡಿಯಾ ಜಡ್ಜಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನೇತೃತ್ವದ ಪೀಠ ಈ ತೀರ್ಪು ನೀಡಿದೆ. ನ್ಯಾಯಾಂಗ ಸೇವೆಗೆ ಸೇರಲು ಬಯಸುವವರಿಗೆ ನ್ಯಾಯಾಲಯದ ಅನುಭವ ಮುಖ್ಯ ಎಂದು ಕೋರ್ಟ್ ಹೇಳಿದೆ.
ಈ ತೀರ್ಪು ನ್ಯಾಯಾಂಗ ಸೇವೆ ಪರೀಕ್ಷೆ ಬರೆಯುವವರಿಗೆ ಮುಖ್ಯವಾಗಿದೆ. ವಕೀಲ ವೃತ್ತಿಯಲ್ಲಿ ಅನುಭವ ಇದ್ದರೆ ಮಾತ್ರ ಪರೀಕ್ಷೆ ಬರೆಯಲು ಸಾಧ್ಯವಾಗುತ್ತದೆ. ಇದರಿಂದ ಹೊಸದಾಗಿ ಪದವಿ ಪಡೆದವರಿಗೆ ತೊಂದರೆಯಾಗಲಿದೆ. ಆದರೆ, ನ್ಯಾಯಾಂಗದ ದಕ್ಷತೆ ಹೆಚ್ಚಿಸಲು ಈ ತೀರ್ಪು ಸಹಾಯಕವಾಗಬಹುದು.
ಈ ತೀರ್ಪಿನಿಂದ ನ್ಯಾಯಾಂಗದಲ್ಲಿ ಅನುಭವಿ ವಕೀಲರು ಮಾತ್ರ ಜಡ್ಜ್ ಆಗಲು ಸಾಧ್ಯವಾಗುತ್ತದೆ. ಇದರಿಂದ ನ್ಯಾಯಾಂಗದ ಗುಣಮಟ್ಟ ಹೆಚ್ಚಾಗಬಹುದು. ಆದರೆ, ಹೊಸದಾಗಿ ಪದವಿ ಪಡೆದವರಿಗೆ ಅವಕಾಶ ಸಿಗುವುದು ಕಷ್ಟವಾಗುತ್ತದೆ.
ಕೆಳ ಹಂತದ ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗ ಹುದ್ದೆಗಳಿಗೆ ಸೇರ ಬಯಸುವ ಹೊಸ ಕಾನೂನು ಪದವೀಧರರಿಗೆ ಸುಪ್ರೀಂಕೋರ್ಟ್ ನಿಬಂಧನೆ ವಿಧಿಸಿದೆ. ನ್ಯಾಯಾಂಗ ಸೇವೆಯಲ್ಲಿ ಸೇರಬೇಕಾದರೆ, ಕನಿಷ್ಠ ಮೂರು ವರ್ಷ ಕೋರ್ಟ್ಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸುವುದು ಕಡ್ಡಾಯ ಎಂದು ಹೇಳಿದೆ.
ನ್ಯಾಯಾಂಗ ಸೇವಾ ಆಕಾಂಕ್ಷಿಗಳ ಕುರಿತು ಈ ತೀರ್ಪನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠ ಪ್ರಕಟಿಸಿತು. ಅಖಿಲ ಭಾರತ ನ್ಯಾಯಾಧೀಶರ ಸಂಘ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಅಲ್ಲದೇ, ಹೈಕೋರ್ಟ್ಗಳು ಸಲ್ಲಿಸಿದ ವಿವಿಧ ವರದಿಗಳನ್ನು ಇದೇ ವೇಳೆ ಉಲ್ಲೇಖಿಸಿತು.
ಹೊಸ ಕಾನೂನು ಪದವೀಧರರು ನ್ಯಾಯಾಂಗ ಸೇವೆಗೆ ನೇರವಾಗಿ ಪ್ರವೇಶಿಸಲು ಅವಕಾಶ ನೀಡುವುದು ಪ್ರಾಯೋಗಿಕ ಸವಾಲುಗಳನ್ನು ಸೃಷ್ಟಿಸುತ್ತದೆ ಎಂದು ಅಭಿಪ್ರಾಯಪಟ್ಟ ಪೀಠವು, ಹೊಸದಾಗಿ ಕಾನೂನು ಪದವಿ ಪಡೆದವರು, ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಹಾಜರಾಗುವಂತಿಲ್ಲ. ನ್ಯಾಯಾಂಗ ಸೇವೆಯ ಆರಂಭಿಕ ಹಂತದ ಹುದ್ದೆಗಳಿಗೆ ಸೇರಬಯಸುವವರಿಗೆ ಕನಿಷ್ಠ ಮೂರು ವರ್ಷಗಳ ವಕೀಲಿಕೆ ಅಭ್ಯಾಸ ಅಗತ್ಯವಾಗಿದೆ ಎಂದಿತು.