ಬಳ್ಳಾರಿ:25.. ಗಣಿನಾಡು ಬಳ್ಳಾರಿಯಲ್ಲಿ ಮೊದಲ ಬಾರಿಗೆ ಕೆಎ-34 ಆಫ್ ರೋಡ್ ಚಾಲೆಂಜ್ ಸoಸ್ಥೆಯ ಆಶ್ರಯದಲ್ಲಿ ನ.28, 29 ಹಾಗೂ 30 ರಂದು ಮೂರು ದಿನಗಳಕಾಲ ನಾಲ್ಕು ಚಕ್ರ ವಾಹನಗಳ ಸಾಹಸಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಬಳ್ಳಾರಿಯ ಕೆಎ-34 ಆಫ್ ರೋಡ್ ಚಾಲೆಂಜ್ ಸoಸ್ಥೆಯ ಅಧ್ಯಕ್ಷ ವಿಂದಿಯಾ ವರ್ಮಾ ಅವರ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನ ಜನೆಕುಂಟೆ ಪ್ರದೇಶದಲ್ಲಿ 4 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮೋಡಿ ಫೈಡ್ ಪೆಟ್ರೋಲ್ ಅಥವಾ ಡೀಸೆಲ್ ವಾಹನಗಳ, ಎಕ್ಸ್ಪರ್ಟ್ ಪೆಟ್ರೋಲ್, ಡೀಸೆಲ್, ಥಾರ್ 2020 ಜಿಮ್ಮಿ ಹಾಗೂ ಮಹಿಳೆಯರ ವಿಭಾಗ ಸೇರಿದೆ. ಇದು ಬಳ್ಳಾರಿಯಲ್ಲಿ ಮೊದಲ ಬಾರಿಗೆ ಆಯೋಜಿಸುತ್ತಿರುವುದು ಹೆಮ್ಮೆ ತರಿಸಿದೆ. ಮಹಾರಾಷ್ಟ್ರದ ಸತಾರಾ, ರಾಜ್ಯದ ವಿಜಯಪುರ, ಕಲಬುರ್ಗಿ, ಹಾಸನ, ನರಸಿಂಹರಾಜ ಪುರ, ಶಿವಮೊಗ್ಗ, ಬೆಂಗಳೂರು, ಮಡಿಕೇರಿ, ಸುರಪುರ, ಸೇರಿದಂತೆ ಕೇರಳ ರಾಜ್ಯ ನಾನಾ ಕಡೆಯಿಂದ ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದಾರೆ. ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸoಸ್ಥೆಯ ಕಾರ್ಯದರ್ಶಿ ಕೆನಿತ್ ವರ್ಮಾ ಅವರು ಮಾತನಾಡಿ, ಬಳ್ಳಾರಿಯಲ್ಲಿ ಮೊದಲ ಬಾರಿಗೆ ನಾಲ್ಕು ಚಕ್ರ ವಾಹನಗಳ ಸಾಹಸಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಎಲ್ಲ ಸುರಕ್ಷತೆ ಕ್ರಮಗಳು ಸೇರಿದಂತೆ ಅನುಮತಿಯನ್ನು ಪಡೆಯಲಾಗಿದೆ. ಈ ಕ್ರೀಡೆ ಸುಮಾರು 1ರಿಂದ 1.5 ಕೀ.ಮೀ. ಇರಲಿದೆ. ಕೆ.ಎ.34 ಬಳ್ಳಾರಿ ಆಫ್ ರೋಡ್ 4*4 ಚಾಲೆಂಜ್ ಸೀಸನ್ -1 ಜೀಪ್ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲ ಬಹುಮಾನ 30 ಸಾವಿರ, 1 ರನ್ನರ್ ಅಪ್ 20 ಸಾವಿರ, 2ನೇ ರನ್ನರ್ ಅಪ್ 10 ಸಾವಿರ ಬಹುಮಾನ ನೀಡಲಾಗುವುದು. ತಾಲೂಕಿನ ಜಾನೆಕುಂಟೆ ಪ್ರದೇಶದ ಬಯಲು ಸೀಮೆಯಲ್ಲಿ ಈ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ. ನ.28 ರಂದು ನಗರದಲ್ಲಿ ಮಾಜಿ ಸಚಿವ, ಗ್ರಾಮಿಣ ಶಾಸಕ ಬಿ.ನಾಗೇಂದ್ರ ಅವರು ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಚಾಲನೆ ಪರವಾನಿಗೆ ಕಡ್ಡಾಯವಾಗಿದೆ, 18 ವರ್ಷ ಮೇಲ್ಪಟ್ಟವರು ಕ್ರೀಡೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರನ್ನು ನೋಂದಾಯಿಸಲು 9035547674 ಸಂಪರ್ಕಿಸಬಹುದು ಎಂದರು. ಈ ಸಂದರ್ಭದಲ್ಲಿ ಸoಸ್ಥೆಯ ಖಜಾಂಚಿ ಡಾ.ರಾಹುಲ್ ಎಂ.ಪಿ.,
ಸಲಹೆಗಾರರಾದ ಸಂತೋಷ್ ಮಾರ್ಟಿನ್, ಹಿರಿಯ ಪತ್ರಕರ್ತ ಅಹಿರಾಜ್, ವಿಜಯ ಆನಂದ್, ಸoಸ್ಥೆಯ ರಾಜೇಶ್, ದರ್ಶನ ಚೌದ್ರಿ, ಸಾಯಿ ಪ್ರಸಾದ್ ಇದ್ದರು.


