“ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನದ ಜೊತೆಗೆ ಶಿಸ್ತು, ಸಮಯ ಪಾಲನೆ ಕಲಿಸುವುದು ಅಗತ್ಯ”

Pratibha Boi
“ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನದ ಜೊತೆಗೆ ಶಿಸ್ತು, ಸಮಯ ಪಾಲನೆ ಕಲಿಸುವುದು ಅಗತ್ಯ”
WhatsApp Group Join Now
Telegram Group Join Now

ಸಂಕೇಶ್ವರ : ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನದ ಜೊತೆಗೆ ಶಿಸ್ತು, ಸಮಯ ಪಾಲನೆ ಕಲಿಸುವುದು ಅಗತ್ಯವಾಗಿದೆ ಎಂದು ಚಿಕ್ಕೋಡಿ ಡಿಡಿಪಿಐ ಆರ್. ಎಸ್. ಸಿತಾರಾಮು ಹೇಳಿದರು.

ಮಂಗಳವಾರ ಇಲ್ಲಿನ ಬ್ರಿಲಿಯಂಟ್ ಸಿಬಿಎಸ್‌ಇ ಶಾಲೆಗೆ ಭೇಟಿ ನೀಡಿ, ಶಾಲೆಯ ಶಿಕ್ಷಕರೊಂದಿಗೆ ಮಾತನಾಡಿ ಸಲಹೆ ನೀಡಿದರು.

ಮಕ್ಕಳ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಅವರ ವ್ಯಕ್ತಿತ್ವವೂ ಸಮಾನವಾಗಿ ರೂಪುಗೊಳ್ಳಬೇಕು. ಬದುಕಿನ ವಾಸ್ತವವನ್ನು ಅರಿತು, ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತು ಜಾಣ್ಮೆಯನ್ನು ಮಕ್ಕಳಲ್ಲಿ ಬೆಳೆಸಬೇಕು” ಎಂದರು.

ಜಿ ಹೆಚ್‌ಎಸ್ ಎಸ್. ಡಿ. ನಾಯಿಕ ಮಾತನಾಡಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಬಗ್ಗೆ ಕಾಳಜಿಯುಳ್ಳ ಉಪನಿರ್ದೇಶಕರ ಮಾರ್ಗದರ್ಶನ ದೊರೆತಿರುವುದು ಹಾಗೂ ಶಿಕ್ಷಕರಿಗೆ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸುವ ಡಿಡಿಪಿಐ ಆರ್. ಎಸ್ ಸೀತಾರಾಮು ಅವರ ಈ ಭೇಟಿಯು ಶಾಲೆಗೆ ಹೊಸ ಉತ್ಸಾಹ ತುಂಬಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಪವನ ಕಣಗಲಿ ಅವರು ಉಪನಿರ್ದೇಶಕ ಆರ್. ಎಸ್. ಸೀತಾರಾಮು ಅವರನ್ನು ಆತ್ಮೀಯವಾಗಿ ಸತ್ಕರಿಸಿದರು. ವಿಷಯ ಪರೀಕ್ಷ ಬಿ. ಎಸ್. ಖಾಡೆ, ಆಡಳಿತಾಧಿಕಾರಿ ವಿನಯ ಹಾಲದೇವರಮಠ, ನಿರ್ದೇಶಕ ಶಶಾಂಕ್ ಮಾಳಿ, ಪ್ರಾಚಾರ್ಯೆ ನಸೀಮಾ ಢಾಂಗೆ ಹಾಗೂ ಶಾಲಾ ಸಿಬ್ಬಂದಿ

WhatsApp Group Join Now
Telegram Group Join Now
Share This Article