ಜೂ.೨೯ರಂದು ‘ಓಡುವ ಪಾದ ಕಾಡುವ ಸರಪಳಿ’ ಗ್ರಂಥ ಬಿಡುಗಡೆ

Pratibha Boi
WhatsApp Group Join Now
Telegram Group Join Now
ಸಿಂದಗಿ:ಸಿಂದಗಿಯ ನೆಲೆ ಪ್ರಕಾಶನ ಸಂಸ್ಥೆಯು ಸಾಹಿತಿ, ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಚನ್ನಪ್ಪ ಕಟ್ಟಿ ವಿರಚಿತ ಓಡುವ ಪಾದ ಕಾಡುವ ಸರಪಳಿ ಎಂಬ ಗ್ರಂಥ ಬಿಡುಗಡೆ ಭಾನುವಾರ ಜೂ.೨೯ರಂದು ಬೆಳಿಗ್ಗೆ ೧೦:೩೦ಗಂಟೆಗೆ ಪಟ್ಟಣದ ಬಸವ ಮಂಟಪದಲ್ಲಿ ಜರುಗಲಿದೆ ಎಂದು ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ತಿಳಸಿದ್ದಾರೆ.
ಈ ಕಾರ್ಯಕ್ರಮದ ಸಾನಿಧ್ಯವನ್ನು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಲಿದ್ದು, ಗ್ರಂಥ ಬಿಡುಗಡೆಯನ್ನು ಖ್ಯಾತ ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪೂರ ನೆರವೇರಿಸುವರು. ಗ್ರಂಥಾವಲೋಕನವನ್ನು ಉಜಿರೆಯ ಸಾಹಿತಿ, ವಿಮರ್ಶಕರಾದ ಡಾ.ರಾಜಶೇಖರ ಹಳೆಮನಿ ಮಾಡಲಿದ್ದು, ಅಧ್ಯಕ್ಷತೆಯನ್ನು ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡೆಶೆಟ್ಟಿ ವಹಿಸಿಕೊಳ್ಳುವರು ಎಂದು ನೆಲೆ ಪ್ರಕಾಶನ ಸಂಚಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.
WhatsApp Group Join Now
Telegram Group Join Now
Share This Article