ಇಂಡಿ : ತಾಲೂಕ ಪಂಚಾಯತ್ ಇಂಡಿ ಸಭಾ ಭವನದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ ಇಂಡಿ ಶ್ರೀ ಡಾ. ಭೀಮಾಶಂಕರ ಕನ್ನೂರ ಸರ್ ರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತಿಗಳ ಲೆಕ್ಕ ಪರಿಶೋಧನಾ ವರದಿಯಲ್ಲಿನ ಆಡಿಟ್ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳ ತಿರುವಳಿಗಾಗಿ ೧೦೦ ದಿನಗಳ ಗ್ರಾಮ ಪಂಚಾಯತಿ ಲೆಕ್ಕ ಪರಿಶೋಧನಾ ಅಭಿಯಾನದ ಅಡಹಾಕ್ ಸಮಿತಿ ಸಭೆ ಜರುಗಿಸಲಾಯಿತು.
೨೦೧೪ -೧೫ ರಿಂದ ೨೦೨೩ – ೨೪ ರ ಅಂತ್ಯದವರೆಗೆ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಬಾಕಿ ಇರುವ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳನ್ನು ಇತ್ಯರ್ಥಗೊಳಿಸಲು ಅಡಹಾಕ್ ಸಮಿತಿ ಸಭೆ ಜರುಗಿಸಿದ್ದು ಸಭೆಯಲ್ಲಿ ಎಲ್ಲ ದಾಖಲಾತಿಗಳು ಮತ್ತು ಆಡಿಟ್ ವರದಿಗಳನ್ನು ತಾಲೂಕ ನೂಡಲ್ ಅಧಿಕಾರಿಗಳಾದ ಲೆಕ್ಕ ಅಧೀಕ್ಷಕರು ಶ್ರೀ ಸಂತೋಷ್ ದಂದರಗಿ ರವರು ಪರಿಶೀಲಿಸಿದರು.
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ ಬಾಕಿ ಉಳಿದಿರುವ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳನ್ನೂ ನಿರ್ಲಕ್ಷ ವಹಿಸದೆ ಮುಂದಿನ ಸಭೆಯಲ್ಲಿ ಅನುಪಾಲನಾ ವರದಿಯೊಂದಿಗೆ ಸಭೆಗೆ ಹಾಜರಾಗಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿಗಳು ಶ್ರೀ ನಂದೀಪ ರಾಠೋಡ, ಸಹಾಯಕ ಲೆಕ್ಕಾಧಿಕಾರಿಗಳು ಶ್ರೀ ಶ್ರೀಶೈಲ ಹಡಪದ, ಶ್ರೀ ವೈ ಡಿ ಮನಗೂಳಿ, ಶ್ರೀಮತಿ ರಾಜಶ್ರೀ ಕಂಬಾರ , ತಾಲೂಕಿನ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕ ಪಂಚಾಯತಿ ಸಿಬ್ಬಂದಿಗಳು ಇದ್ದರು.