ರಾಮದುರ್ಗ: ಭಾರತೀಯ ಅಂಚೆ ಇಲಾಖೆಯು ಭಾರತಾದ್ಯಂತ ಹೊಸ ತಂತ್ರಾಂಶವಾದ ಎಪಿಟಿ ೨.೦ ಅನ್ನ ಜಾರಿಗೊಳಿಸುತ್ತಿದೆ. ಭಾರತೀಯ ಅಂಚೆ ಇಲಾಖೆ ಆದೇಶದಂತೆ ಜೂನ್ ೨೬ ರಂದು ಬೈಲಹೊಂಗಲ, ರಾಮದುರ್ಗ ಪ್ರಧಾನ ಅಂಚೆ ಕಚೇರಿ ಮತ್ತು ಅದರ ವ್ಯಾಪ್ತಿಯ ಎಲ್ಲಾ ಉಪ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಎಪಿಟಿ ೨.೦ ಅಳವಡಿಕೆ ಜಾರಿಯಾಗುತ್ತಿದೆ.
ಇದರ ಪೂರ್ವ ಸಿದ್ಧತೆಗಾಗಿ ಭಾರತೀಯ ಅಂಚೆ ಇಲಾಖೆ ಆದೇಶದಂತೆ ಬೈಲಹೊಂಗಲ, ಕಿತ್ತೂರು ಯರಗಟ್ಟಿ ಸವದತ್ತಿ ಮತ್ತು ರಾಮದುರ್ಗ ತಾಲೂಕು ವ್ಯಾಪ್ತಿಯಲ್ಲಿರುವ ಅಂಚೆ ಕಚೇರಿಗಳು, ಉಪ ಹಾಗೂ ಶಾಖಾ ಅಂಚೆ ಕಚೇರಿಗಳಲ್ಲಿ ಜೂನ್ ೨೪ ಮತ್ತು ೨೫ ರಂದು ಎಲ್ಲಾ ರೀತಿಯ ವ್ಯವಹಾರ ವಹಿವಾಟು ಸ್ಥಗಿತಗೊಳ್ಳಲಿವೆ ಮತ್ತು ಜೂನ್ ೨೬ ರಿಂದ ಸೇವೆಗಳನ್ನ ಪುನರಾರಂಭಿಸುತ್ತವೆ.
ಈ ಪರಿವರ್ತನೆಯ ಅವಧಿಯಲ್ಲಿ ನಮ್ಮ ಮೌಲ್ಯಯುತ ಗ್ರಾಹಕರು ಅಂಚೆ ಇಲಾಖೆಯೊಂದಿಗೆ ಸಹಕರಿಸಬೇಕೆಂದು ನಾವು ವಿನಂತಿ ಸುತ್ತೇವೆ. ಅನಾನುಕೂಲತೆಗೆ ತುಂಬಾ ವಿಷಾದವಿದೆ. ಹೊಸ ಎಪಿಟಿ ೨.೦ ವ್ಯವಸ್ಥೆಯು ನಮ್ಮ ಸೇವೆಗಳನ್ನು ವರ್ಧಿಸುವ ಮತ್ತು ದಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಗ್ರಾಹಕರು ಸಹಕರಿಸಬೇಕು ಎಂದು ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಮಹಾಂತೇಶ ಹೊಸಮನಿ ಕೋರಿದ್ದಾರೆ.