ಇಂಡಿ – ಸೌದತ್ತಿ ಎಲ್ಲಮ್ಮ ಗುಡ್ಡಕ್ಕೆ ನೇರ ಬಸ್ ಪ್ರಾರಂಭ

Pratibha Boi
ಇಂಡಿ – ಸೌದತ್ತಿ ಎಲ್ಲಮ್ಮ ಗುಡ್ಡಕ್ಕೆ  ನೇರ ಬಸ್ ಪ್ರಾರಂಭ
WhatsApp Group Join Now
Telegram Group Join Now

ಇಂಡಿ: ಸುಕ್ಷೇತ್ರ ಸೌದತ್ತಿ ಎಲ್ಲಮ್ಮನ ದರ್ಶನಕ್ಕಾಗಿ ನಿತ್ಯ ಸಾವಿರಾರು ಜನ ಭಕ್ತರು ನಾನಾ ಭಾಗದಿಂದ ಆಗಮಿಸುತ್ತಾರೆ. ಹಾಗಾಗಿ ನಮ್ಮ ಭಾಗದ ಜನ ಸಮಾನ್ಯರಿಗೂ ಅನುಕೂಲವಾಗಬೇಕು ಎಂಬ ಸದಾಶಯದಿಂದ ನೂತನವಾಗಿ ಇಂಡಿ ನಗರದಿಂದ ನೇರವಾಗಿ ಸೌದತ್ತಿ ಎಲ್ಲಮ್ಮ ಗುಡ್ಡಕ್ಕೆ ಹೊಗಲು ಕೆಸ್‌ಆರ್‌ಟಿಸಿ ಬಸ್ ಪ್ರಾರಂಭಿಸಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಇಂಡಿ ಕೆಸ್‌ಆರ್‌ಟಿಸಿ ಘಟಕದಿಂದ ನೂತನವಾಗಿ ಸೌದತ್ತಿ ಎಲ್ಲಮ್ಮ ಗುಡ್ಡಕ್ಕೆ ಹೊರಡುವ ಬಸ್ಸಿಗೆ ಚಾಲನೆ ನೀಡಿ ಮಾತನಾಡಿದರು.
ಸಾಕಷ್ಟು ಜನ ಎಲಮ್ಮದೇವಿ ಭಕ್ತರಿರುವುದರಿಂದ ಅವರಿಗೆ ಅನುಕೂಲವಾಗಲಿದ್ದು ಅಲ್ಲದೆ ಶಕ್ತಿ ಯೊಜನೆ ಅನ್ವಯವಾಗುವುದರಿಂದ ನಮ್ಮ ತಾಯಂದಿರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹಾಗೆ ಎಲ್ಲ ಜನ ಸಾಮಾನ್ಯರಿಗೂ ಇದು ಸಹಕಾರಿಯಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಎಚ್.ಎಸ್.ಪಾಟೀಲ, ಮಹಾದೇವಪ್ಪ ಏವೂರ, ಘಟಕ ವ್ಯವಸ್ಥಾಪಕ ರೇವಣಸಿದ್ದ ಖೈನೂರ, ಕಾಸು ಹೊಸಮನಿ, ಗಂಗಾಧರ ಸಾಲಿಗಾಂವ ಸೇರಿದಂತೆ ಅನೇಕರಿದ್ದರು.

 

WhatsApp Group Join Now
Telegram Group Join Now
Share This Article