ಮಕ್ಕಳ್ಳನ್ನ ಸಂಸ್ಕಾರವಂತರನ್ನಾಗಿ ಮಾಡಿ : ಶ್ರೀಗಳು

Pratibha Boi
ಮಕ್ಕಳ್ಳನ್ನ ಸಂಸ್ಕಾರವಂತರನ್ನಾಗಿ ಮಾಡಿ : ಶ್ರೀಗಳು
WhatsApp Group Join Now
Telegram Group Join Now

ಯರಗಟ್ಟಿ: ಗುರು ಹಿರಿಯರನ್ನು ಸ್ಮರಸಿಕೊಂಡು ಲಿಂಗಪೂಜೆ, ನಿರಂತರ ಕಾಯಕದಲ್ಲಿ ತೊಡಗಿ, ಮಕ್ಕಳ್ಳನ್ನ ಸಂಸ್ಕಾರವಂತರನ್ನಾಗಿ ಮಾಡಿ ಶಿವಾನುಭವಗಳನ್ನು ನಡೆಸುತ್ತ ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದು ಉಪ್ಪಿನಬೆಟಗೇರಿ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಗಳು ಹೇಳಿದರು.

ಇಲ್ಲಿನ ಮಹಾಂತ ದುರದುಂಡಿಶ್ವರ ಮಠದಲ್ಲಿ ಹಮ್ಮಿಕೊಂಡ ಲಿಂ. ಮಹಾಂತ ಶಿವಯೋಗಿಗಳ ೧೫೬ ನೇ ಜಯಂತ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮುನವಳ್ಳಿಯ ಶ್ರೀ ಮುರಘೇಂದ್ರ ಸ್ವಾಮಿಗಳು ಮಾತನಾಡಿ, ಮಹಾನ ತಪಸ್ವಿಗಳಾದ ಮಹಾಂತ ಶಿವಯೋಗಿಗಳು ಬಸವ ತತ್ವ ಪರಿಪಾಲಕರಾಗಿದ್ದರು. ಬಸವ ತತ್ವ ಹಾಗೂ ವಚನ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಸವ ಅದ್ಯಯನ ಪೀಠ ಸ್ಥಾಪಿಸಿದರು ಎಂದರು.

ಮಾಜಿ ಸಂಸದೆ ಮಂಗಲಾ ಅಂಗಡಿ ಮಾತನಾಡಿ, ಇಂತಹ ಸಂತ ಮಹಾಂತರ ಜಯಂತಿ ಉತ್ಸವ, ಆದ್ಯಾತ್ಮೀಕ ಕಾರ್ಯಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳು ಸೇರಿ ಇಡೀ ಕುಟುಂಬವೇ ಸಂಸ್ಕಾರಯುತವಾಗುವುದು ಎಂದರು.
ಸಂಜೆ ಮಹಾಂತ ಶಿವಯೋಗಿಗಳ ಪಲ್ಲಕ್ಕಿ ಉತ್ಸವ, ತೊಟ್ಟಿಲೋತ್ಸ ನಡೆಯಿತು. ನಿವೃತ್ತರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು.

ಪ್ರಾದ್ಯಾಪಕ ರಮೇಶ ಮುರಂಕರ ಉಪನ್ಯಾಸ ನೀಡಿದರು, ಮಹಾಬಳೇಶ್ವರ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ, ಬಾಪೂಜಿ ರಾಯರ, ಎನ್.ಕೆ. ಹುಚರಡ್ಡಿ, ವೀರೂಪಾಕ್ಷ ಜಕಾತಿ, ಎಂ. ವಿ. ನಂದಿಮಠ, ಮಹಾಂತೇಶ ಜಕಾತಿ, ಮಡಿವಾಳಪ್ಪ ಬಿದರಗಡ್ಡಿ, ರಾಜೇಂದ್ರ ವಾಲಿ, ಶಿವಾನಂದ ಪಟ್ಟಣಶೆಟ್ಟಿ, ಗುರುಲಿಂಗಪ್ಪ ವಾಲಿ, ಪ್ರಕಾಶ ಪಾಟೀಲ, ಸುರೇಶಗೌಡ ಪಾಟೀಲ, ಮಹಾಂತಯ್ಯ ಮಠ, ಬಿ.ಕೆ. ಪಾಟೀಲ, ಎಸ್.ಎಸ್. ಕಿಣಗಿ, ಎ. ಕೆ. ನದಾಫ್, ಸದಾನಂದ ಹಣಬರ, ಕುಮಾರ ಹಿರೇಮಠ, ಕುಮಾರ ಜಕಾತಿ, ಇತರರು ಇದ್ದರು.

WhatsApp Group Join Now
Telegram Group Join Now
Share This Article