ಹುನಗುಂದ: ತಾಲ್ಲೂಕಿನ ಅಮರಾವತಿ-ಬಿಂಜವಾಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪಕ್ಕದಲ್ಲಿನ ನೀರಿನ ದೊಡ್ಡದಾದ ತೆಗ್ಗಿನಲ್ಲಿ ರವಿವಾರ ಮೊಸಳೆ ಕಾಣಿಸಿಕೊಂಡಿದೆ. ಎಂದಿನಂತೆ ನೀರಿನ ಗುಂಡಿಯಲ್ಲಿ ಮೊಸಳೆ ಮಲಗಿರುವುದು ಹಾಗೂ ನೀರಿನೊಳಗೆ ಮೊಸಳೆ ಮುಳುಗಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಕೆಲವು ದಿನಗಳ ಹಿಂದೆಯೂ ಇದೇ ಸ್ಥಳದಲ್ಲಿ ಮೊಸಳೆ ಕಾಣಿಸಿಕೊಂಡು ದಡದಲ್ಲಿ ನೀರು ಕುಡಿಯಲು ಹೋಗಿದ ಎರಡು ಕುರಿಗಳನ್ನು ಬಲಿ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಪ್ರತಿನಿತ್ಯ ಹುನಗುಂದ ಕರಡಿ ಮಾರ್ಗದಲ್ಲಿ ಬಿಂಜವಾಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಇದಾಗಿದ್ದು ನಿತ್ಯ ನೂರಾರು ಜನರು ಇದೇ ಮಾರ್ಗದ ರಸ್ತೆಯಲ್ಲಿ ಸಂಚರಿಸುತ್ತಿರುತ್ತಾರೆ. ಹಾಗೂ ರೈತರು ತಮ್ಮ ಜಾನುವಾರುಗಳಿಗೆ ನೀರು ಕುಡಿಸಲು ಆತಂಕ ಉಂಟು ಮಾಡಿದೆ. ಯುವಕರು ಈಜಾಡಲು ಜಮೀನುಗಳಿಗೆ ತೆರಳಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆಯನ್ನು ಹಿಡಿದು ದೂರ ಪ್ರದೇಶಕ್ಕೆ ಸಾಗಿಸಬೇಕು ಎಂದು
ಅಮರಾವತಿ ಬಿಂಜವಾಡಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕೂಡಲೇ ಎಚ್ಚೆತ್ತ ಅರಣ್ಯ ಇಲಾಖೆಯ ಅಧಿಕಾರಿಗಳು ನೀರಿನ ಗುಂಡಿಯ ಹತ್ತಿರ ಮೊಸಳೆಯ ಇವೆ ಎಂದು ಎಚ್ಚರಿಕೆಯ ನಾಮ ಫಲಕ ಹಾಕಿದ್ದಾರೆ
ಅಮರಾವತಿ-ಬಿಂಜವಾಡಗಿ ರಸ್ತೆಯ ಪಕ್ಕದಲ್ಲಿನ ನೀರಿನಲ್ಲಿ ಮೊಸಳೆ
