ಷಡ್ಯಂತ್ರ ಮಾಡಿ ತಾಲ್ಲೂಕನ್ನು ಒಡೆಯುವುದು ಸರಿಯಲ್ಲ : ಮಹಾಂತಯ್ಯ ಗಚ್ಚಿನಮಠ

Pratibha Boi
ಷಡ್ಯಂತ್ರ ಮಾಡಿ ತಾಲ್ಲೂಕನ್ನು ಒಡೆಯುವುದು ಸರಿಯಲ್ಲ : ಮಹಾಂತಯ್ಯ ಗಚ್ಚಿನಮಠ
WhatsApp Group Join Now
Telegram Group Join Now

ಹುನಗುಂದ: ರಾಜಕೀಯ ಲಾಭಕ್ಕಾಗಿ ತಾಲ್ಲೂಕನ್ನು ಒಡೆಯುವ ಕಾರ್ಯಕ್ಕೆ ಮುಂದಾದರೆ ತಾಲ್ಲೂಕಿಗೆ ಮಾಡುವ ದ್ರೋಹ ಎಂದು ಪಟ್ಟಣದ ಮುಖಂಡ ಮಹಾಂತಯ್ಯ ಗಚ್ಚಿನಮಠ ಹೇಳಿದರು.
ಶಾಸಕ ಎಚ್ ವೈ ಮೇಟಿ ಅವರು ಹುನಗುಂದ ತಾಲ್ಲೂಕಿನ ೨೦ ಗ್ರಾಮಗಳನ್ನು ಗುಳೇದಗುಡ್ಡ ಅಥವಾ ಬಾಗಲಕೋಟೆಗೆ ಸೇರ್ಪಡೆ ಮಾಡಬೇಕು ಎಂಬ ಹೇಳಿಕೆ ಹಿನ್ನಲೆಯಲ್ಲಿ ಮಂಗಳವಾರ ಸಂಜೆ ಪಟ್ಟಣದ ಗಚ್ಚಿನಮಠದಲ್ಲಿ ನಡೆದ ಚಿಂತನ ಮಂಥನ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕು ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಷಡ್ಯಂತ್ರ ಮಾಡಿ ತಾಲ್ಲೂಕನ್ನು ಒಡೆಯುವುದು ಸರಿಯಲ್ಲ. ಈ ರೀತಿ ಮಾಡುವುದರಿಂದ ಮುಂದಿನ ದಿನಗಳಲ್ಲಿ ಸಮಗ್ರ ತಾಲ್ಲೂಕಿನ ಅಸ್ಥಿತ್ವಕ್ಕೆ ದಕ್ಕೆ ಬರಲಿದೆ ಎಂಬ ಸಂಶಯ ಮೂಡುತ್ತಿದೆ. ಹೀಗಾಗಿ ಜಾತಿ, ಮತ, ಪಂಥ ಬೇಧ ಮರೆತು ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಜೊತಗೆ ಈ ವಿಷಯವನ್ನು ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಗಮನಕ್ಕೆ ತರುವ ಕೆಲಸ ಆಗಬೇಕಿದೆ ಎಂದರು.
ಪಟ್ಟಣದ ನಾಗರೀಕ ಸೇವಾ ಸುಧಾರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ. ಬಿ. ಕಂಬಾಳಿಮಠ ಮಾತನಾಡಿ, ಶಾಸಕ ಎಚ್ ವೈ ಮೇಟಿ ಅವರ ಹೇಳಿಕೆಯನ್ನು ಖಂಡಿಸೋಣ. ಅಖಂಡ ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಹಳ್ಳಿಗಳನ್ನು ಒಳಗೊಂಡ ತಾಲ್ಲೂಕು ನಮ್ಮದಾಗಿತ್ತು. ನಂತರ ಇಳಕಲ್ ತಾಲ್ಲೂಕನ್ನು ಮಾಡಿದ್ದರಿಂದ ಕೇವಲ ೮೦ ಹಳ್ಳಿಗಳು ಉಳಿದಿವೆ. ಮತ್ತೆ ೨೦ ಗ್ರಾಮಗಳು ಒಡೆದು ಹೋದರೆ ವ್ಯಾಪಾರ ವಹಿವಾಟು ಕುಂಠಿತಗೊಳ್ಳಲಿದೆ ಜೊತಗೆ ತಾಲ್ಲೂಕಿನ ಪ್ರಗತಿಗೆ ಹಿನ್ನಡೆಯಾಗಲಿದೆ ಎಂದರು.
ಮುಖಂಡರರಾದ ಶೇಖರಪ್ಪ ಬಾದವಾಡಗಿ, ಎಂ ಎಸ್ ಮಠ, ಸಂಗಣ್ಣ ಅವಾರಿ ಮಹಾಂತೇಶ ಹಳ್ಳೂರು, ಪ್ರಭು ಇದ್ದಲಗಿ ಮಾತನಾಡಿದರು. ಕೃ? ಜಾಲಿಹಾಳ, ಸಾಂತಪ್ಪ ಹೊಸಮನಿ ಚನ್ನಬಸಪ್ಪ ಇಳಕಲ್, ವಿಜಯ ಮಹಾಂತೇಶ ಮಲಗಿಹಾಳ ಇತರರಿದ್ದರು.

WhatsApp Group Join Now
Telegram Group Join Now
Share This Article