ಸತ್ಯಂ ಬಿಎಡ್ ಕಾಲೇಜಿನಲ್ಲಿ ಪೈಲ್ವಾನ್ ರಂಜಾನ್ ಸಾಬ್ ಕೃತಿ ಉಚಿತ ವಿತರಣೆ
ಬಳ್ಳಾರಿ ಜೂನ್ 17 : ಲೇಖಕ ಸಿದ್ದರಾಮಯ್ಯ ಕಲ್ಮಠ ವಿರಚಿತ ಏಕೀಕರಣದ ಹೋರಾಟಗಾರ ಪೈಲ್ವಾನ್ ರಂಜಾನ್ ಸಾಬ್ ಕೃತಿಯನ್ನು ಇಂದು ಸತ್ಯಂ ಬಿಎಡ್ ಕಾಲೇಜಿನಲ್ಲಿ ಶಿಕ್ಷಣ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬಳ್ಳಾರಿ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಯಶವಂತ್ ನಾಗೆರೆಡ್ಡಿ ವಹಿಸುವರು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಅಶ್ವರಾಮು, ಮುಖ್ಯ ಅತಿಥಿಗಳಾಗಿ, ಜಿ ಟಿ ಫೌಂಡೇಶನ್ ಅಧ್ಯಕ್ಷರಾದ ಜೋಳದ ರಾಶಿ ತಿಮ್ಮಪ್ಪ, ಪಿ ಗಾದೆಪ್ಪ, ಜಿಕೆ ಸ್ವಾಮಿ, ವಕೀಲರಾದ ಬಾದಾಮಿ ಶಿವಲಿಂಗ ಭಾಗವಹಿಸುವರು.