ಸಿಂದಗಿ: ರಕ್ತದ ಗುಂಪನ್ನು ಕಂಡುಹಿಡಿದ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾರ್ಲ್ಲೈನ್ ಸ್ಟ್ರೈನರ್ ಜನ್ಮ ದಿನದ ನಿಮಿತ್ಯ ವಿಶ್ವ ರಕ್ತದಾನ ದಿನವನ್ನು ವಿಶ್ವದಾದ್ಯಂತ ಆಚರಿಸುತ್ತಾರೆ ಎಂದು ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ರಾಜಶೇಖರ ನರಗೋದಿ ಹೇಳಿದರು.
ಸಿಂದಗಿ ಪಟ್ಟಣದ ಲೋಯಲ ಶಾಲೆಯಲ್ಲಿ ತಾಲೂಕು ಮತ್ತು ಜಿಲ್ಲಾ ಆರೋಗ್ಯ ಕೇಂದ್ರ, ಸಂಗಮ ಸಮಾಜ ಸೇವಾ ಸಂಸ್ಥೆ, ಲೋಯೋಲ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಯಕ್ಕೆ ಸರಿಯಾಗಿ ರಕ್ತ ದೊರೆಯದೆ ವಿವಿಧ ಕಾಯಿಲೆಗಳಿಂದ ಬಳಲುವ ರೋಗಿಗಳು, ತಲೆಸ್ಮಿಯ, ಹಿಮೋಫಿಲಿಯಾ ರೋಗಿಗಳು ಹಾಗೂ ಅಪಘಾತದ ಗಾಯಾಳುಗಳು ಮೃತಪಟ್ಟಿದ್ದಾರೆ. ಅಮೂಲ್ಯವಾದ ಜೀವ ಉಳಿಸಲು ಎಲ್ಲರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದು ಅತೀ ಅವಶ್ಯಕ ಎಂದರು.
ಈ ವೇಳೆ ರಕ್ತನಿಧಿ ಬಂಡಾರದ ವೈದ್ಯಾಧಿಕಾರಿ ಡಾ.ಸುಮಾ ಮಮದಾಪುರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮ ಸಂಸ್ಥೆಯ ಫಾದರ್ ಸಂತೋಷ ಮಾತನಾಡಿದರು. ಲೋಯಲಾ ಶಾಲೆಯ ಫಾದರ್ ವಿಶಾಲ, ಬಿ.ಬಿ.ಖತೀಜ, ಲವ ಗಾಣಿಗೇರ, ಸಿಸ್ಟರ್ ಸೋಫಿಯಾ ಸೇರಿದಂತೆ
“ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವುದು ಅತೀ ಅವಶ್ಯಕ”
