ಕಲುಷಿತ ನೀರು ಸೇವಿಸಿ 13 ಮಂದಿ ಅಸ್ವಸ್ಥ

Ravi Talawar
ಕಲುಷಿತ ನೀರು ಸೇವಿಸಿ 13 ಮಂದಿ ಅಸ್ವಸ್ಥ
WhatsApp Group Join Now
Telegram Group Join Now

ಮೈಸೂರು: ಕೊಳ್ಳೇಗಾಲ ಸಮೀಪದ ಮೂಡುವೇನಹಳ್ಳಿಯಲ್ಲಿ ಪೈಪ್‌ಲೈನ್ ಮೂಲಕ ಸರಬರಾಜು ಮಾಡಲಾಗಿದ್ದ ಕಲುಷಿತ ನೀರು ಸೇವಿಸಿ 13 ಮಂದಿ ಅಸ್ವಸ್ಥರಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ಭಾನುವಾರ ವರದಿಯಾಗಿದೆ.

ವಾಂತಿ ಮತ್ತು ಅತಿಸಾರದಿಂದ ಬಳಲುತ್ತಿದ್ದ ಜನರನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಕೊಳ್ಳಗಾಲದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಕೊಳಚೆ ನೀರು ಮತ್ತು ಮಳೆ ನೀರು ಬೋರ್‌ವೆಲ್‌ಗೆ ಸೇರುತ್ತಿದ್ದು, ಇದು ನೀರು ಕಲುಷಿತಗೊಳ್ಳಲು ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

 

WhatsApp Group Join Now
Telegram Group Join Now
Share This Article