ನೇಸರಗಿ.ದೇಶದ ರಸ್ತೆ, ಆರ್ಥಿಕತೆ, ಮಹಿಳಾ ಅಭಿವೃದ್ಧಿ, ಜಾಗತಿಕ ಮಟ್ಟದಲ್ಲಿ ಭಾರತ ಹೆಮ್ಮೆರವಾಗಿ ಬೆಳೆಯಲು, ಗ್ರಾಮೀಣ ಮೂಲಭೂತ ಸೌಕರ್ಯ, ರೈತರ ಉದ್ದಾರಕ್ಕೆ, ಕೈಗಾರಿಕೆ, ಸ್ವದೇಸಿ ವಸ್ತು ಉತ್ಪಾದನೆ, ಮೇಕ್ ಇಂಡಿಯಾ, ದೇಶ ರಕ್ಷಣೆಗೆ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಜೀ ಅವರ 11 ವರ್ಷದ ಆಡಳಿತ ಕಾರ್ಯವೈಖರಿ ಕಾರಣ ಎಂದು ಮಾಜಿ ಶಾಸಕ, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಶುಕ್ರವಾರದಂದು ಕಿತ್ತೂರುವಿಧಾನ ಸಭೆ ಕ್ಷೇತ್ರದ ಬಿಜೆಪಿ ಮಂಡಲ ವತಿಯಿಂದ ಸಮೀಪದ ದೇಶನೂರ ಗ್ರಾಮದಲ್ಲಿ ವಿಕಸಿತ ಭಾರತ ಅಮೃತಕಾಲ,ಸೇವೆ,ಸುಶಾಸನ,ಬಡವರ ಕಲ್ಯಾಣ ಮೋದಿಜೀ ಸರ್ಕಾರಕ್ಕೆ 11 ವರ್ಷಗಳ ಸಿದ್ಧಿಯಿಂದ ಸಾಧನೆಯವರೆಗೆ ಮೋದಿಜೀ ಸರ್ಕಾರ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು..
ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ದೇಶ ಇಂದು ಆರ್ಥಿಕವಾಗಿ ಮತ್ತು ಭಾರತ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಲು ಮತ್ತು ಇಡೀ ಜಗತ್ತು ಭಾರತದತ್ತ ನೋಡುವಂತೆ ಮಾಡಿದ್ದು ದೇಶದ ಪ್ರಧಾನಿ ನರೇಂದ್ರ ಮೋದೀಜಿ ಅವರ 11 ವರ್ಷದ ಆಡಳಿತ ಮತ್ತು ದಿನನಿತ್ಯ 18 ಘಂಟೆಗಳ ಪರಿಶ್ರಮ ಕಾರಣ ಎಂದರು.
ಕಿತ್ತೂರು ಬಿಜೆಪಿ ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ ಮಾತನಾಡಿ 60 ವರ್ಷ ಕಾಂಗ್ರೆಸ್ ಸರ್ಕಾರ ಮಾಡದ್ದನ್ನು ಕೇವಲ 11 ವರ್ಷಗಳಲ್ಲಿ ಮೋದಿಜೀ ದೇಶಕ್ಕೆ ಮತ್ತು ಜಗತ್ತಿಗೆ ಮಾಡಿ ತೋರಿಸಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ಧನಶ್ರೀ ದೇಸಾಯಿ, ಮನೋಜ್ ಪಾಟೀಲ, ಮಾಜಿ ಮದ್ಯಪಾನ ಮಂಡಳಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ತುಬಾಕಿ, ಕೆ ಎಮ್ ಎಫ್ ನಿರ್ದೇಶಕ ಬಸವರಾಜ ಪರವಣ್ಣವರ, ಶ್ರೀಮತಿ ಲಕ್ಷ್ಮಿ ಇನಾಮದಾರ, ಬಸನಗೌಡ ಶಿದ್ರಾಮಣಿ, ಮಾಜಿ ತಾ ಪಂ ಸದಸ್ಯ ಶ್ರೀಶೈಲ ಕಮತಗಿ, ಪಕ್ಷದ ಮುಖಂಡರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.