ವಿಜಯಪುರ,ಏ.೧, (ಕರ್ನಾಟಕ ವಾರ್ತೆ): ನಮ್ಮ ಜನಗಣತಿ, ನಮ್ಮ ಭವಿ? ಧ್ಯೇಯವಾಕ್ಯದಡಿ ದೇಶ ವ್ಯಾಪಿ ನಡೆಯಲಿರುವ ರಾಷ್ಟ್ರೀಯ ಜನಗಣತಿ ೨೦೨೭ ರ ಮೊದಲ ಹಂತದ ಸ್ವಯಂ ಗಣತಿ ಕಾರ್ಯಕ್ಕೆ ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಮಡಿವಾಳಪ್ಪ ಕರಡಿ ಹಾಗೂ ಉಪಮೇಯರ್ ಸುಮಿತ್ರಾ ಜಾಧವ ಬುಧವಾರ ಚಾಲನೆ ನೀಡಿದರು.
ಮೇಯರ್ ಮಡಿವಾಳಪ್ಪ ಕರಡಿ ಅವರು ತಮ್ಮ ಸ್ವಯಂ ಗಣತಿ ಮಾಡುವುದರ ಮೂಲಕ ನಗರ ವ್ಯಾಪ್ತಿಯಲ್ಲಿ ಸ್ವಯಂ ಗಣತಿ ಕಾರ್ಯಕ್ಕೆ ಚಾಲನೆ ನೀಡಿ, ನಗರದ ಜನತೆ ಸ್ವಯಂ ಗಣತಿ ಮಾಡಿಕೊಳ್ಳಲು ಕರೆ ನೀಡಿದರು.
ರಾಷ್ಟ್ರೀಯ ಜನಗಣತಿ ೨೦೨೭ರ ಮೊದಲ ಹಂತದ ಎಚ್ ಎಲ್ ಒಗೆ ಸಂಬಂಧಿಸಿದಂತೆ ಏ. ೦೧ರಿಂದ ೧೫ ರ ವರೆಗೆ ದತ್ತಾಂಶ ಆಧಾರಿತ ಸ್ವಯಂ ಗಣತಿ ಕಾರ್ಯವನ್ನು ನಗರದ ನಾಗರಿಕರು ತಮ್ಮ ಕುಟುಂಬದ ಸ್ವಯಂ ಗಣತಿ ಮಾಡಿಕೊಳ್ಳುವ ಮೂಲಕ ಜನಗಣತಿ ಕಾರ್ಯಕ್ಕೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದರು.
ಇದೇ ವೇಳೆ ಉಪಮೇಯರ್ ಸುಮಿತ್ರಾ ಜಾಧವ ಅವರು ಕೂಡಾ ಸ್ವಯಂ ಗಣತಿ ಮಾಡಿಕೊಳ್ಳುವುದರ ಮೂಲಕ ಗಣತಿ ಕಾರ್ಯಕ್ಕೆ ಸಾಕ್ಷಿಯಾದರು.
ನಗರದ ಹೆಚ್ಚುವರಿ ಜನಗಣತಿ ಅಧಿಕಾರಿ ಶಿಲ್ಪಶ್ರೀ ಸಾಗರ, ಅಂಬಿಕಾ ಕಾಂಬಳೆ ಹಾಗೂ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು.
(ಫೋಟೋ ಲಗತ್ತಿಸಿದೆ ಸಿ-೧,೨)


