ಸೇನೆಯ ಹವಾಲ್ದಾರ ತುಕಾರಾಮ ಪಾಟೀಲ ಸೇವೆ ಅಪಾರ: ಮಲಗೌಡ ಪಾಟೀಲ

Ravi Talawar
 ಸೇನೆಯ ಹವಾಲ್ದಾರ ತುಕಾರಾಮ ಪಾಟೀಲ ಸೇವೆ ಅಪಾರ: ಮಲಗೌಡ ಪಾಟೀಲ
WhatsApp Group Join Now
Telegram Group Join Now
ಬೆಳಗಾವಿ. ಭಾರತೀಯ ಸೇನೆ ಸಿಕಂದರಾಬಾದ ಮಿಲಿಟರಿ ಕಾಲೇಜ ಅಪ್ ಇಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕ ಸೇವೆ ಸೇವೆ ಸಲಿಸುತ್ತಿದ್ದ ತುಕಾರಾಮ್ ಶಿವಾಜಿರಾವ ಪಾಟೀಲ ಎಂದೆಂದಿಗೂ ಅಮರ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ  ಆಪ್ತ ಕಾರ್ಯದರ್ಶಿ ಹಾಗೂ ಕೆ ಪಿ ಸಿ ಸಿ ಸದಸ್ಯ ಮಲಗೌಡ ಪಾಟೀಲ ಹೇಳಿದರು.
ಅವರು ಗುರುವಾರದಂದು ನಿನ್ನೆ ಪುಣೆಯ ಮಿಲಿಟರಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾದ ಅಮರ ಜವಾನ್ ಪಾರ್ಟಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮಾತನಾಡಿದರು.
ಗುರುವಾರದಂದು ಸಕಲ ಸರ್ಕಾರಿ ಗೌರವದೊಂದಿಗೆ ಸೈನಿಕರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕಳೆದ 15 ವರ್ಷಗಳಿಂದ ಸೇನೆಯಲ್ಲಿ  ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ಸಮಯದಲ್ಲಿ ಈ ದುರ್ಘಟನೆ ನಡೆದು ಕುಟುಂಬ ಸದಸ್ಯರು ದುಃಖದ ಮಡಿಲಿನಲ್ಲಿ  ಇದ್ದದು ಕಂಡು ಬಂದಿತು. ರಾಜಕೀಯ ಮುಖಂಡರು, ಗ್ರಾಮಸ್ಥರು ವೀರ ಯೋಧನ ಅಂತ್ಯಕ್ರಿಯಲ್ಲಿ ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article