ಮುದ್ದೇಬಿಹಾಳ: “ನಮ್ಮ ಸಮಾಜವನ್ನು ನಾವೆಲ್ಲರೂ ಒಗ್ಗೂಡಿ ಜಿಲ್ಲಾಮಟ್ಟದಲ್ಲಿ ಕಟ್ಟಿ ಬೆಳೆಸೋಣ. ಸಮಾಜದ ಸಂಘಟನೆಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಅತಿ ಮುಖ್ಯವಾಗಿದೆ,” ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ಜಿಲ್ಲಾಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ ಹೇಳಿದರು.
ತಾಲ್ಲೂಕಿನ ಕಂದಗನೂರ ಗ್ರಾಮದಲ್ಲಿ ಶನಿವಾರ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೇವಜೀರ ಸಮಾಜದ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ನೂತನ ಪದಾಧಿಕಾರಿಗಳ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ’ದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುವೆ:
ಇದೇ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಮಾಜ ತಾಲ್ಲೂಕು ಅಧ್ಯಕ್ಷ ಶಂಕರಗೌಡ ಎಸ್. ಶಿವಣಗಿ, “ಸಮಾಜವು ನನ್ನ ಮೇಲೆ ನಂಬಿಕೆಯಿಟ್ಟು ನೀಡಿರುವ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ತಾಲ್ಲೂಕಿನಲ್ಲಿ ಹಂಡೇವಜೀರ ಸಮಾಜವನ್ನು ಕಟ್ಟಿ ಬೆಳೆಸಲು ಸರ್ವರ ಸಹಕಾರ ಅಗತ್ಯ,” ಎಂದು ತಿಳಿಸಿದರು.
ಸಾನಿಧ್ಯ ಮತ್ತು ಆಶೀರ್ವಚನ
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇದಮೂರ್ತಿ ಮಹಾದೇವಯ್ಯ ಶಾಸ್ತ್ರಿ ಹಿರೇಮಠ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಶಿಕ್ಷಕ ಎಸ್.ಬಿ. ಹಂಡರಗಲ್ಲ ಅವರು ಸಮಾಜದ ಸ್ಥಿತಿಗತಿ ಹಾಗೂ ಸಂಘಟನೆಯ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಚಂದ್ರಶೇಖರಯ್ಯ ಹಿರೇಮಠ, ಶಿವಣಗೌಡ ಬಿರಾದಾರ, ಪಿ.ಕೆ.ಪಿ.ಎಸ್ ಅಧ್ಯಕ್ಷ ಶಿದ್ದರಾಮಯ್ಯ ಗಣಾಚಾರಿ, ಸಂಗಮೇಶ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಚ್.ಟಿ. ಬಿರಾದಾರ, ನಿಡಗುಂದಿ ವಿ.ಲಿ.ಹ. ಸಂಘದ ತಾಲ್ಲೂಕು ಅಧ್ಯಕ್ಷ ಬಸವರಾಜ ವಂದಾಲ, ಶಿದ್ರಾಮಪ್ಪ ಶಿವಣಗಿ, ಮಹಾಂತೇಶ ಬಿದರಕುಂದಿ, ಭೀಮನಗೌಡ ಪಾಟೀಲ,
ಸಮಾಜದ ಕಾರ್ಯಧ್ಯಕ್ಷ ಭೀಮನಗೌಡ ಕೊಡಗಾನೂರ, ಅವ್ವನಗೌಡ, ಎಸ್.ಎಸ್. ಹುಗಾರ, ಸಾಹೇಬಗೌಡ ಪಾಟೀಲ, ಮೈಬುಬಸಾಬ ನಾಯ್ಕೋಡಿ, ಬಸವರಾಜ ಗಂಗೂರ, ಮಂಜುನಾಥಗೌಡ ಪೋಲಿಸ್ ಪಾಟೀಲ,ಬಸವರಾಜ ಡಮನಾಳ,ಗೌಡಪಗೌಡ ಪಾಟೀಲ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ನೂತನ ಪದಾಧಿಕಾರಿಗಳಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಕಂದಗನೂರ ಗ್ರಾಮಸ್ಥರ ವತಿಯಿಂದ ನೂತನ ಪದಾಧಿಕಾರಿಗಳಾದ
ತಾಲ್ಲೂಕು ಅಧ್ಯಕ್ಷ
ಎಸ್.ಎಸ್. ಶಿವಣಗಿ, ಭೀಮನಗೌಡ ಕೊಡಗಾನೂರ,
ಮಲ್ಲನಗೌಡ ಬಿರಾದಾರ,ಎಂ ಬಿ ಬಿರಾದಾರ,ಆರ್.ಎಸ್. ಬಿರಾದಾರ,ಚಂದ್ರು ಢಮನಾಳ,ಹುಲ್ಲನಗೌಡ ಬಿರಾದಾರ,ಚಂದ್ರಶೇಖರ ಗೋನಾಳ,ಸದಾನಂದ ಪಾಟೀಲ,ಶೇಷಪ್ಪಗೌಡ ಪಾಟೀಲ,ದ್ಯಾಮನಗೌಡ ಪಾಟೀಲ,
ಮುಂತಾದವರನ್ನು ಅತ್ಯಂತ ಸಡಗರದಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಬಿ.ಸಿ. ಬಿರಾದಾರ ಸ್ವಾಗತಿಸಿದರು, ಬಾಬು ಹಿರೇಮಠ ಕಾರ್ಯಕ್ರಮ ನಿರೂಪಿಸಿದರು ಮತ್ತು ಎಸ್.ಆರ್. ಗೌಡರ ವಂದಿಸಿದರು


