ಲಿಂಗಾಯತ ಮಹಾಸಭಾ ಘಟಕದ ಮಾಧ್ಯಮ ಸಂಯೋಜಕರ ಆಯ್ಕೆ

Ravi Talawar
 ಲಿಂಗಾಯತ ಮಹಾಸಭಾ ಘಟಕದ ಮಾಧ್ಯಮ ಸಂಯೋಜಕರ ಆಯ್ಕೆ
WhatsApp Group Join Now
Telegram Group Join Now
ಧಾರವಾಡ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಮಾಧ್ಯಮ ಸಂಯೋಜಕರಾಗಿ ಪತ್ರಕರ್ತ ರವಿಕುಮಾರ ಕಗ್ಗಣ್ಣವರ ಆಯ್ಕೆ.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಜಿಲ್ಲಾ ಘಟಕ ಧಾರವಾಡದ ವತಿಯಿಂದ ಏರ್ಪಡಿಸುವ ಸಮಾಜಪರ ಕಾರ್ಯಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರಚಾರ ಮಾಡುವ ಗೌರವ ಸೇವೆಗೆ  ಪದಾಧಿಕಾರಿಗಳ ಸಭೆಯಲ್ಲಿ ರವಿಕುಮಾರ ಕಗ್ಗಣ್ಣವರನ್ನು  ಮಾಧ್ಯಮ ಸಂಯೋಜಕರನ್ನಾಗಿ ನೇಮಿಸಲಾಗಿದೆ.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ ಮತ್ತು ಸಮಸ್ತ ಪದಾಧಿಕಾರಿಗಳು ಇವರ ಸೇವೆಯನ್ನು ಪರಿಗಣಿಸಿ ಮಹಾಸಭಾದ ಸಮಸ್ತ ಕಾರ್ಯಗಳನ್ನು ಪ್ರಚಾರ ಮಾಡಲು ನೇಮಕ ಮಾಡಿದ್ದಾರೆ.
WhatsApp Group Join Now
Telegram Group Join Now
Share This Article